Monday 25 November 2013

ಪ್ರಾರ್ಥನೆ ಫಲ ತರುವುದು ಯಾವಾಗ?



ಕರ್ತನಾದ ಯೇಸು ಹೀಗೆ ಹೇಳುತ್ತಾನೆ
  "ನೀವು ನನ್ನಲ್ಲಿಯೂ, ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು"  ಯೋಹಾನ 15:7

ಕರ್ತನಾದ ಯೇಸು  ಎಷ್ಟು ಮಹಿಮೆಯುಳ್ಳವನೋ ಅದರಂತೆ ಆತನ ವಾಕ್ಯಗಳನ್ನು ಒಳಗೊಂಡ ಸತ್ಯವೇದವು(ಬೈಬಲ್) ಮಹಿಮೆಯುಳ್ಳದ್ದಾಗಿದೆ.
ನಾವು ದೇವರಲ್ಲಿ ನೆಲೆಗೊಂಡಿರಬೇಕು, ಆತನ ಆಜ್ಞೆಗಳನ್ನು ನಮ್ಮ ಹೃದಯದಲ್ಲಿಟ್ಟು, ಅದರಂತೆಯೇ ನಡೆಯಬೇಕು. ದೇವರ ವಾಕ್ಯವು (ಆಜ್ಞೆಗಳು) ನಮ್ಮ ಕಾಲಿಗೆ ದೀಪವಾಗಿಯೂ, 
ನಮ್ಮ ಮಾರ್ಗಕ್ಕೆ ಬೆಳಕಾಗಿಯೂ ಇವೆ.  ಅದರಂತೆ ನಡೆಯುವವರಿಗೆ  ಆಡ್ಡಿ ಆತಂಕಗಳಿಲ್ಲ, ಕಾಲು ಜಾರುವುದೂ ಇಲ್ಲ, ಅದು ಸನ್ಮಾರ್ಗವಾಗಿರುತ್ತದೆ.

ಬಳ್ಳಿಯು ಗಿಡದಲ್ಲಿ ನೆಲೆಗೊಂಡಿರದಿದ್ದರೆ, ಅದು ಬೇರೆಯಾಗಿದ್ದು ಫಲಕೊಡಲು ಸಾದ್ಯವಿಲ್ಲ! 
ಆದ್ದರಿಂದ

 ನೀವು ಕ್ರಿಸ್ತನಲ್ಲಿ ನೆಲೆಗೊಂಡಿರಿ,
           ಆತನ ವಾಕ್ಯಗಳು ನಮ್ಮ ಹೃದಯಗಳಲ್ಲಿರಲಿ,

 ಆಗ ನಿಮ್ಮ ಪ್ರಾರ್ಥಿಸುವ ಪ್ರಾರ್ಥನೆಗಳು, ವಿಜ್ಞಾಪನೆಗಳು ದೇವರ ಸನ್ನಿಧಿಯನ್ನು ತಲುಪುತ್ತವೆ. ನಿಮ್ಮ ಹೃದಯದ ಬಯಕೆಗಳು, ನಿಮ್ಮ ಕೋರಿಕೆಗಳು ಯಾವುದಿದ್ದರೂ ಅವುಗಳನ್ನು ನೀವು ಹೊಂದಬಹುದು. ನಿಮ್ಮ ಕಾರ್ಯಗಳು ಸಫಲವಾಗುವುದು. ದೇವರು ನಿಮ್ಮ ಪಕ್ಷದಲ್ಲಿರುವನು. ನಿಮ್ಮ ಪ್ರಯಾಸಗಳು, ಪರಿಶ್ರಮಗಳು ವ್ಯರ್ಥವಾಗುವುದೇ ಇಲ್ಲ. 

 ನೀವು ದೇವರಲ್ಲಿ ನೆಲೆಗೊಂಡಿರದೆ, ಆತನಿಂದ ದೂರವಾಗುವಾಗ ಆತನೂ ನಿಮ್ಮಿಂದ ದೂರವಾಗುವನು.

"ಯಾವನು ನನ್ನಲ್ಲಿ ನೆಲೆಗೊಂಡಿರುವುದಿಲ್ಲವೋ ಅವನು ಹೊರಕ್ಕೆ ಬಿಸಾಡಲ್ಪಟ್ಟ ಕೊಂಬೆಯಂತೆ ಒಣಗಿಹೋಗುವನು"  ಯೋಹಾನ 15:6

No comments:

Post a Comment